ಅಭಿಷೇಕ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಭಿಷೇಕ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 3, 2009

ಬೆರಳ್‌ನ ತಿರುಳ್

ಲೋಕಸಭಾ ಚುನಾವಣೆಯ ಮತದಾನದ ಗುರುತಿನ ಶಾಯಿಯನ್ನು ಕೆಲ ಗಣ್ಯರು ಬೇರೆ ಬೆರಳುಗಳಿಗೆ ಹಚ್ಚಿಸಿಕೊಂಡದ್ದಕ್ಕೆ ಕಾರಣಗಳನ್ನು ಈ ಕೆಳಗೆ ಬಯಲುಗೊಳಿಸಲಾಗಿದೆ.

ಚಿತ್ರ ಕೃಪೆ: Deccan Herald

ಬಲಪಂಥೀಯ ಯಡಿಯೂರಪ್ಪನವರು ಪಕ್ಷದ ಬಲವರ್ಧನೆಗಾಗಿ ಬಲಮುರಿ ಗಣಪತಿ ದೇವಸ್ಥಾನದ ಅರ್ಚಕರ ಸಲಹೆಯಂತೆ ಹಾಗೂ ತಮ್ಮ ಬಲಗೈ ಬಂಟ ಮುಜರಾ(ಯಿ) ಸಚಿವ ಕೃಷ್ಣಯ್ಯ ಶೆಟ್ಟರ ಸೂಚನೆಯಂತೆ ಬಲಗೈ ಬೆರಳಿಗೆ ಶಾಯಿ ಹಚ್ಚಿಸಿಕೊಂಡಿದ್ದಾರೆ. ತಮ್ಮ ಹೆಸರನ್ನು ಹಲವರು ’ಎಡ’ಯೂರಪ್ಪ ಎಂದು ಉಚ್ಚರಿಸುವುದರಿಂದ ಅದನ್ನು ’ಬಲ’ಯೂರಪ್ಪ ಎಂದು ಬದಲಿಸಿಕೊಳ್ಳುವ ಆಲೋಚನೆಯೂ ಮಾನ್ಯ ಮುಖ್ಯಮಂತ್ರಿಗಳಿಗಿದೆಯಂತೆ. ಅವರ ಸುಪುತ್ರ ರಾಘವೇಂದ್ರ ಮಾತ್ರ ಮಾಡರ್ನ್ ಗೈ ಆಗಿರುವುದರಿಂದ ಎಡಗೈ ಬೆರಳಿಗೇ ಶಾಯಿ ಹಚ್ಚಿಸಿಕೊಂಡಿದ್ದಾನೆ.

ಚಿತ್ರ ಕೃಪೆ: Reuters

ಚಿತ್ರ ಕೃಪೆ: AP

ಅಮಿತಾಭ್ ಬಚ್ಚನ್‌ನ ಪೂರಾ ಕುಟುಂಬವೇ ತೋರು ಬೆರಳಿನ ಬದಲು ಮಧ್ಯಬೆರಳಿಗೆ ಶಾಯಿ ಹಚ್ಚಿಸಿಕೊಂಡಿದೆ. ಏಕೆಂದರೆ, ಆ ಕುಟುಂಬವು ಸದಾ ’ಸೆಂಟರ್’ ಆಫ್ ಅಟ್ರ್ಯಾಕ್ಷನ್ ಆಗಿರಬಯಸುತ್ತದೆ.
’ನಾನೇನು ಕಮ್ಮಿ? ನಾನೂ ಅಷ್ಟೇಯ’, ಎಂದು ಅಮೀರ್ ಖಾನ್ ಕೂಡ ’ಸೆಂಟರ್’ ಫಿಂಗರಿಗೆ ಶಾಯಿ ಹಚ್ಚಿಸಿಕೊಂಡಿದ್ದಾನೆ.
(ಬಚ್ಚನ್ ಕುಟುಂಬವು ಕ್ಯಾಮೆರಾಗಳಿಗೆ ಮಧ್ಯಬೆರಳನ್ನು ಚಾಚಿ ತೋರಿಸುತ್ತಿರುವ ಚಿತ್ರವನ್ನು ಪತ್ರಿಕೆಗಳಲ್ಲಿ ಕಂಡು ಅಮೆರಿಕದ ಕೆಲ ಎನ್ನಾರೈ ಸಂಘಟನೆಗಳು ’ಛೀಛೀ’ ಎಂದು ಅಸಹ್ಯಪಟ್ಟುಕೊಂಡಿವೆಯೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.)


ಚಿತ್ರ ಕೃಪೆ: AFP

ಈ ನಡುವೆ, ಬಲಪಂಥೀಯ ಅಡ್ವಾಣಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ ಸಾರಾಭಾಯ್ ಕೂಡ ಬಲಗೈ ಬೆರಳಿಗೆ ಶಾಯಿ ಹಚ್ಚಿಸಿಕೊಂಡಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮಲ್ಲಿಕಾ ಅವರು ’ಆಪರೇಷನ್ ಕಮಲ’ಕ್ಕೆ ಬಲಿಯಾಗಲಿದ್ದಾರೆಯೇ ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿ ಹುಟ್ಟಿಕೊಂಡಿದೆ. ಆದರೆ, ಮಲ್ಲಿಕಾ ಅವರ ಪುತ್ರಿ ಅನಾಹಿತಾ, ’ಹಾಗೇನಿಲ್ಲ, ನಮ್ಮಮ್ಮ ಕೂಚಿಪುಡಿ-ಭರತನಾಟ್ಯಗಳಲ್ಲೇ ಜೀವನ ಕಳೆದದ್ದರಿಂದ ಅವರಿಗೆ ಯಾವ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ, ಹಾಗಾಗಿ ಪರಪಾಟಾಯಿತು, ಅಷ್ಟೆ’, ಎಂದು ಪತ್ರಿಕಾ ಹೇಳಿಕೆ ನೀಡುವ ಮೂಲಕ ವಿಷಯವನ್ನು ತಿಳಿಗೊಳಿಸಲೆತ್ನಿಸಿದ್ದಾರೆ.

ಚಿತ್ರ ಕೃಪೆ: AP

ಎಲ್ಲರಿಗಿಂತ ಬುದ್ಧಿವಂತರೆಂದರೆ ನರೇಂದ್ರ ಮೋದಿ. ಮಾಧ್ಯಮಗಳ ಕ್ಯಾಮೆರಾಗಳಿಗೆ ಶಾಯಿಯ ಬೆರಳನ್ನು ತೋರಿಸುವ ನೆಪದಲ್ಲಿ ಮೋದಿಯು ಪಕ್ಕದ ಬೆರಳನ್ನೂ ಜೊತೆಗೆ ಚಾಚಿ ವಿಜಯದ ಸಂಕೇತವನ್ನೂ (ಹಿಂದುಮುಂದಾಗಿ) ಬೀರಿಬಿಟ್ಟಿದ್ದಾರೆ! ಫಲಿತಾಂಶಕ್ಕೆ ಮುನ್ನವೇ ಜನರನ್ನು ಈ ರೀತಿ ಮೋಡಿ ಮಾಡಲೆತ್ನಿಸುವ ಮೋದಿಯ ಮಿದುಳೆಂದರೆ ಸಾಮಾನ್ಯವೆ?!

ಶುಕ್ರವಾರ, ಮಾರ್ಚ್ 20, 2009

ಐಶ್ ವಿಷ್ಯ ಐಸಾ!

ಎರಡು ವರ್ಷಗಳ ಕೆಳಗೆ
ಐಶ್ ಎಂಬ
ಐಶ್ಕಾಂತದ ಸೆಳೆತಕ್ಕೆ ಸಿಕ್ಕು
ಅಭಿಷೇಕು
ಶೇಕು!

ಅಭಿಷೇಕಿನ
ಶಾಕಿಗೆ
ಕರಗಿ
ಐಸ್
ಪಾನಿ ಪಾನಿ!

ಏನ್ಮಾಡೋದು ಸ್ವಾಮೀ,
ಜವಾನಿ
ದಿವಾನಿ!

ಪರಿಣಾಮ
ಸುಖಾಂತ.
ಅಭಿ-
-ಶೇಕ್ ಸಾಹೇಬ ಆದ
ಐಶ್-ಕಾಂತ.

ಅಮಿತಾಭನಿಗೆ ಅಮಿತಾನಂದ;
ಜಯಾ ಮುಖದಲ್ಲಿ ಜಯ.
ಕೃಷ್ಣರಾಜ ರೈ ಖುಷಿಯೇ ಸೈ;
ವೃಂದಮ್ಮನೋರು?
ಕುಡಿದರು ಹಾಲುಖೀರು.

ಐಶ್-ಅಭಿ ಇಬ್ಬರೂ
ಕೋಟ್ಯಧಿಪತಿಗಳಾದ್ದರಿಂದ
ಇಬ್ಬರದ್ದೂ ಈಗ
ಐಶಾರಾಮಿ ಬದುಕು.

ಸಲ್ಮಾನ್, ವಿವೇಕ್ ಮಾತ್ರ
ಸಲ್ಲಲಿಲ್ಲ
ಯದಕೂ!

(ಯದಕೂ=ಯಾವುದಕ್ಕೂ. ದಾವಣಗೆರೆ ಭಾಷೆಯಲ್ಲಿ.)