ಸೋಮವಾರ, ಜೂನ್ 15, 2009

ಟ್ವೆಂಟಿ20 ಚರಮಗೀತೆ!

ಟ್ವೆಂಟಿ20 ಇಂದ ಭಾರತ ಹೊರಕ್ಕೆ
ದೋನಿಯ ದೋಣಿ ಸಾಗಲಿಲ್ಲ ದಡಕ್ಕೆ!

ಗೌತಮ್ ಗಂಭೀರೇನೋ ಗಂಭೀರ್‍ವಾಗೇ ಆಡ್ದ
ಸುರೇಶ್ ರೈನಾ ಮಾತ್ರ ಹುಡುಗಾಟವಾಡ್ದ!
ಸುರಿಸ್ಲಿಲ್ಲ ರನ್‌ಗಳ ರೈನನ್ನ ಆತ
ಎರಡು ರನ್ನಿಗೇ ಪಾಪ, ಹೊಡೆದ್ಬಿಟ್ಟ ಗೋತಾ!

ಜಡೇಜಾ ಜಡವಾದ; ಯುವರಾಜ ಅಡ್ಡಿಯಿಲ್ಲ
ದೋನಿ, ಪಠಾಣ್ ಅಂತೂ ಮಸ್ತ್ ಆಡಿದರಲ್ಲ!
ಆದರೂ ಕೊನೇಲವರು ಯಶಸ್ವಿಯಾಗ್ಲಿಲ್ಲ
ಸೈಡ್‌ಬಾಟಮ್ ಫ್ರಂಟಲ್ಲವರಾಟ ನಡೀಲಿಲ್ಲ!

ಟ್ವೆಂಟಿ20 ಕಪ್ಪಿನ ಚಾನ್ಸು ಝೀರೋ ಆಯ್ತಲ್ಲಾ!
ಜಾಹಿರಾತಿಗೆ ಕೊಟ್ಟರು ಗಮನ, ಕ್ರಿಕೆಟ್‌ಗೆ ಕೊಡಲಿಲ್ಲ!

2 ಕಾಮೆಂಟ್‌ಗಳು: