ಬುಧವಾರ, ಆಗಸ್ಟ್ 12, 2009

ಇನ್ನಷ್ಟು ಅರವಜ್ಞ ವಚನಗಳು


(ಅಬಲೂರಿನಲ್ಲಿ ಸರ್ವಜ್ಞನ ಮನೆ)
(ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್)
-೦-

ಹಲಸೂರು ವಳ್ಳುವರ್ ಆಯ್ನಾವ್ರ ಸರ್ವಜ್ಞ
ಅಬಲೂರಿನಲ್ಲಿ ಬರಿ ಜೊಂಡು ಬೂಸಿಯಗೆ
ಮಿದುಳು ಒಸಿ ಮೊಂಡು ಅರವಜ್ಞ

***

ಪ್ರತಿಮೆ ವೋಟಿಗೆ ಬೇಕು ಪ್ರತಿಮೆ ಪೋಟಿಗೆ ಬೇಕು
ಅತಿದೊಡ್ಡ ಸಂತ ಸರ್ವಜ್ಞ ಅವನ ಮನೆ
ಗತಿಗೇಡು ಆಯ್ತೆ ಅರವಜ್ಞ

***

ಸರ್ವಜ್ಞನೆಂಬುವನು ಗರ್ವದಲಿ ಚೆನ್ನೈಲಿ
ಮೆರೆವ ಕಾಲದಲೆ ಅಬಲೂರಿನಲ್ಲೆಮಗೆ
ಮರೆತುಹೋದನೇ ಅರವಜ್ಞ

***

ತಿರುವಳ್ಳುವರ್ನಂತೆ ಸರ್ವಜ್ಞನೂ ಸಬಲ
ಚೆನ್ನೈಲಿ ಮಾತ್ರ ಅಬಲೂರಿನಲಿ ಅವನು
ದುರ್ಬಲನೆ ಆದ ಅರವಜ್ಞ

***

ನಮ್ಮ ಡೀಎಂಕೆ ರಾಷ್ಟ್ರೀಯವಾಯ್ತೀಗ
ಮಾನಗರದಲ್ಲಿ ಮೀಸಲಿಡಿ ನಮಗೆಲ್ಲ
ಬೆಂಗ್ಳೂರ್ ನಮದು ಅರವಜ್ಞ

***

ಉಳ್ಳವರ್ ಸ್ಥಾಪಿಸಲು ವಳ್ಳುವರ್ ಪ್ರತಿಮೆಯನು
ಒಳ್ಳೆ ಪ್ಲಾನಿಂದ ಬೂಸಿಯನು ಕ್ಯಾಷ್ ಮಾಡಿ
ಕೊಳ್ಳಲನುವಾದ ಅರವಜ್ಞ

***

ವಳ್ಳುವರ್ ಪ್ರತಿಮೆ ತಾ ದಳ್ಳುರಿಯ ಕಳೆದೀತೆ
ಒಳ್ಳೆ ಬಾಂಧವ್ಯ ಬೆಸೆದೀತೆ ನೆರೆರಾಜ್ಯ
ಎಳ್ಳು ಬೀರೀತೆ ಅರವಜ್ಞ

7 ಕಾಮೆಂಟ್‌ಗಳು:

  1. ಆನ೦ದ ಸಾರ್,
    ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು . ಶ್ರೀ ಕೃಷ್ಣನು ತಮಗೆ ಸಕಲ ಸೌಭಾಗ್ಯವನ್ನು ಕೊಟ್ಟು ಹರಸಲಿ ಎ೦ದು ಈ ಶುಭ ಸ೦ದರ್ಭದಲ್ಲಿ ಹಾರೈಸುತ್ತೇನೆ

    ರೂಪಾ ಸಾವಿತ್ರಿ.

    ಪ್ರತ್ಯುತ್ತರಅಳಿಸಿ
  2. ರೂಪಾ ಸಾವಿತ್ರಿ ಅವರೇ,
    ನಿಮ್ಮೆಲ್ಲರ ಒಳ್ಳಿತಿಗಾಗಿ ಆ ದೇವರಲ್ಲಿ ನನ್ನದೂ ಕೋರಿಕೆಯಿದೆ.

    ಪ್ರತ್ಯುತ್ತರಅಳಿಸಿ
  3. To quote Paraanjape and Roopa - "Super! Wow! Thumba olleya gulige".

    Liked it a lot

    Kaustuba

    PS: Does blogspot not allow someone without a profile that's not mentioned on the list to post a comment?

    I have disassociated myself from the Man With No Name persona, yet I'm having to use it to post comments here

    ಪ್ರತ್ಯುತ್ತರಅಳಿಸಿ