ಭಾನುವಾರ, ಆಗಸ್ಟ್ 9, 2009

ಸಂಪಂಗಿ, ಸರ್ವಜ್ಞ...ಅಣಕವಾಡು

ಜೈ ಜಗದೀಶ್ ಹರೇ,
ಸ್ವಾಮಿ, ಜೈ ಜಗದೀಶ್ ಹರೇ,
ಭಕ್ತ್ ಜನೋಂಕೇ ಸಂಕಟ್
ಕ್ಷಣ್ ಮೇ ದೂರ್ ಕರೇ

* ಜೈ ಜಗದೀಶ್ ಶೆಟ್ರೇ,
ಸ್ವಾಮಿ, ಜೈ ಜಗದೀಶ್ ಶೆಟ್ರೇ,
ಸಂಪಂಗೀ ಕಾ ಸಂಕಟ್
ಕ್ಷಣ್ ಮೇ ಜೋರ್ ಕರೇ

***

ಈಚಲಾ ಮರಹೀನ ನೀಚರಾ ನೆರೆಹೀನ
ಮೋಚಿದಾ ಹೆಣ್ಣು ತರಹೀನ ಮನೆಯೊಳಗೆ
ಪೇಚಾಟ ಹೀನ ಸರ್ವಜ್ಞ

* ಕರವೇ ಕರಾಳದಿನ ಕನ್ನಡಿಗಗಿದು ಸುದಿನ?
ತಮಿಳರಿಗೆ ಮಾತ್ರ ಸಖ್ಖತ್ತು ದಿನ! ಶಾಸ್ತ್ರಿ ನೀ
ಪರಮ ಮತಿಹೀನ ಅರವಜ್ಞ

***

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದೊಲಾಕಲ್ಲು
ನೀರ್ಕುಡಿಯಲಹುದೆ ಸರ್ವಜ್ಞ

* ಬೂಸಿಯಗೆ ಬುದ್ಧಿಯನು ಭೇಷಾಗಿ ಹೇಳಿದರು
ಕಾಸಿನಷ್ಟೂನು ಬೆಲೆಯಿಲ್ಲ ತಮಿಳರಿಗೆ
ಪೂಸಿಹೊಡೆದೇಬಿಟ್ಟ ಅರವಜ್ಞ
(ಬೂಸಿಯ = ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ)

***

ಜಯ್ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ!

* ಜಯ ಬಿಬಿಎಂಪಿಲಿ ಕಮಲಕೆ ಗೊತ್ತೇ,
ಜಯವೇ ನಮಗೆ ನೋಡ್ತಿರಿ ಮತ್ತೆ!

4 ಕಾಮೆಂಟ್‌ಗಳು:

  1. ಗುಳಿಗೆ ಭಾರಿ ಒಳ್ಳೆಯದಿದೆ . ಹೀಗೆ ಆಗಾಗ ಕೊಡುತ್ತಿರಿ .. ಹ೦ದಿ ಜ್ವರ ಹೇಳ ಹೆಸರಿಲ್ಲದೆ ಓಡ ಬಹುದು. ನಮ್ಮ ಶ್ರೀರಾಮ ದೇವರಿಗೆ ಪ್ರಜೆಗಳಿಗಿ೦ತ ದುಡ್ಡೇ ದೊಡ್ಡಪ್ಪ ..

    ಪ್ರತ್ಯುತ್ತರಅಳಿಸಿ