ಮಂಗಳವಾರ, ಮೇ 19, 2009

ಎಲೆಕ್ಷನ್ ಗುಳಿಗೆಗಳು! - 2

* ಮನಮೋಹನ್ ಸಿಂಗರಿಗೂ ಎಲ್.ಕೆ. ಅಡ್ವಾಣಿ ಅವರಿಗೂ ಏನು ವ್ಯತ್ಯಾಸ?
- ಒಬ್ಬರು ದೇಹಕ್ಕೆ ತಲೆಬಾಗುವವರು, ಇನ್ನೊಬ್ಬರು ದೇಶಕ್ಕೆ ತಲೆಬಾಗುವವರು.

***

* ಲಾಲ್ ಕೃಷ್ಣ ಅಡ್ವಾಣಿ ನಿವೃತ್ತಿ ಹೊಂದುತ್ತಾರಾ ಶ್ರೀಕೃಷ್ಣಾ?
- ಸೇವಾವೃತ್ತಿಗೆ ನಿವೃತ್ತಿ ಎಂಬುದಿಲ್ಲ ಅರ್ಜುನಾ.

***

* ಮನಮೋಹನ್ ಸಿಂಗರಿಗೆ ಮೊದಲ ವಿದೇಶಿ ಅಭಿನಂದನೆ ಜರ್ದಾರಿಯಿಂದ ಬಂತಂತೆ.
- ಮೊದಲ ವಿದೇಶಿ ಸಮಸ್ಯೆಯೂ ಜರ್ದಾರಿಯೇ.

***

* ತೃಣ-ಮೂಲ, ಆದರೆ ಸಾಧನೆ ಬೆಟ್ಟದಷ್ಟು!
- ’ತೃಣ ಒಂದು ಗಿರಿಯಾಗಿ, ಗಿರಿಗಿಂತ ಘನವಾಗಿ, ಎಣಿಸಲಾರದ ಮುದದೊಳ್ ಮಿಂದೆ ನಾನು; ಸೋನ್ಯಾದಿ ಜನವಂದ್ಯ, ಮಾನ್ಯ ಮನಮೋಹನಾ, ನಾನ್ಕೇಳಿದ್ಖಾತೆಗಳ ನೀಡೊ ಎನ್ನೊಡೆಯಾ’, ಎನ್ನುತ್ತಿದ್ದಾರೆ ಮಮತಾ ಬ್ಯಾನರ್ಜಿ.

***

* ಮಮತಾ ಬ್ಯಾನರ್ಜಿಯ ಅರ್ಜಿ?
- ರೈಲ್ವೆ ಖಾತೆಗೆ. ಕೊಡೋದು ಬಿಡೋದು ಮನಮೋಹನ್ ಮರ್ಜಿ.

***

* ಲಾಲು ಮತ್ತು ಮುಲಾಯಂ ಮಂತ್ರಿಗಳಾಗೋಕೆ ಯೋ(ಯಾ)ಚಿಸ್ತಿರೋದು ಆಶ್ಚರ್ಯವಲ್ಲವೆ?
- ಖಂಡಿತ ಅಲ್ಲ. ಅವರು ಡೀಸೆಂಟಾಗಿ ಎಂಪಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಸುಮ್ಮನಿದ್ದಿದ್ದರೆ ಅದು ಆಶ್ಚರ್ಯ.

***

* ಏನ್ ಸಾರ್, ಹೀಗಾಯ್ತು ಲಾಲೂ ಅವಸ್ಥೆ!
- ಹಳಿ ಇಲ್ಲದೆ ರೈಲ್ ಬಿಟ್ರೆ ಇನ್ನೇನಾಗುತ್ತೆ?!

***

* ಲಾಲು ಮುಲಾಯಮ್‌ಗಳಿಗೆ ಮರ್ಯಾದೆ ಇದೆಯೇ?
- ಅದರ ಹಂಗಿದೆಯೇ ಅಂತ ಕೇಳಿ.

***

* ರಾಮ್ ವಿಲಾಸ್ ಪಾಸ್ವಾನಾ?
- ಅಲ್ಲ. ರಾಮ್ ಬಕ್ವಾಸ್, ಪಸೀನಾ!

***

* ಖರ್ಗೆ, ಧರಂ, ಮೊಯ್ಲಿ, ಎಸ್ಸೆಂ, ಕೆ.ಎಚ್. ಎಲ್ಲರೂ ಮಂತ್ರಿಗಳಾಗ್ಬೇಕಂತೆ!
- ಗೆದ್ದಿದ್ದು ಬರೀ ಆರು, ಮಂತ್ರಿಗಿರಿ ಆಸೆ ಜೋರು!

***

* ಮೂರು ಸೀಟು ಇಟ್ಕೊಂಡು ಕುಮಾರಸ್ವಾಮಿ ಕೇಂದ್ರ ಮಂತ್ರಿ?!
- ಹದಿಮೂರು ಪಾರ್ಟಿ ಹಾಕ್ಕೊಂಡು ದೇವೇಗೌಡ್ರು ಪ್ರಧಾನ ಮಂತ್ರಿ ಆಗ್ಲಿಲ್ವೆ?

***

* ಮಂತ್ರಿಯಾಗುವ ಅರ್ಹತೆ ಸಮರ್ಥಿಸಿಕೊಳ್ಳಲು ಕುಮಾರಸ್ವಾಮಿ ದೆಹಲಿಗೆ ಯಾವ ದಾಖಲೆ ತಗೊಂಡು ಹೋಗ್ತಾರೆ?
- ತಾನು ಯುವಕ ಎಂದು ದೃಢಪಡಿಸುವ ’ಯೂತ್ ಸರ್ಟಿಫಿಕೇಟ್’; ತಹಸೀಲ್ದಾರ್ ಸಹಿ ಮಾಡಿದ್ದು!

***

* ಜಯಪ್ರದಾ ಗೆದ್ದುಬಿಟ್ರು!
- ಮತ್ತ್ಯಾಕೆ ಆ ಹೆಸರು ಇಟ್ಕೊಂಡಿದ್ದು ಅಂತೀರಿ.

***

* ಅಜಂ?
- ಖತಂ.

***

* ಅಜರ್?
- ಸಿಕ್ಸರ್! (ಈ ಮೊದಲು ಮ್ಯಾಚ್ ಫಿಕ್ಸರ್.) (ಈಗ ಅಜರ್ ಮೇಲೆ ಅಲ್ಲಾಹ್ ಕೀ ನಜರ್.)

***

* ಜಯಲಲಿತಾ ಭಾಳ ಆಸೆ ಇಟ್ಕೊಂಡಿದ್ರು.
- ಆದ್ರೆ ಜನ ಎಐಎಡಿಎಮ್‌ಕೆ ಎಮಕೆ ಮುರಿದ್ರು!

***

* ಮಾಯಾವತಿ ಪ್ರಧಾನಿ ಆಗೋ ಕನಸು ಕಂಡಿದ್ರು!
- ಏನ್ಮಾಡೋದು, ಮಾಯಾ-ಮಂತ್ರ ಕೆಲಸ ಮಾಡ್ಲಿಲ್ಲ; ಮಾಯಾ-ಜಾಲಕ್ಕೆ ಮಿಕ ಬೀಳ್ಲಿಲ್ಲ! ಮುಂದೆ ಇನ್ನೇನು ಮಾಯಾ-ಬಜಾರ್ ಕಾದಿದೆಯೋ!

***

* ತೃತಿಯ ರಂಗ ಈಗ ಏನಾಗಿದೆ?
- ಅದ್ವಿತೀಯ ಮಂಗ!

***

* ಸಂಘಟನೆ ಕೊರತೆ ಸೋಲಿಗೆ ಕಾರಣ ಅಂತಾರೆ ದೇಶಪಾಂಡೆ.
- ಜೊತೆಗೆ ಅನೇಕ ಘಟನೆಗಳೂ ಕಾರಣ ಅಂತಾರೆ ಸಿದ್ರಾಮಯ್ಯ!

***

* ಕಡಿಮೆ ಮತದಾನ ಎನ್‌ಡಿಎ ಸೋಲಿಗೆ ಕಾರಣ: ಉದಾಸಿ
- ಜನರ ಉದಾಸೀನ ಕಡಿಮೆ ಮತದಾನಕ್ಕೆ ಕಾರಣ: ತಿಪ್ಪೇಶಿ

***

* ಮೋದಿ, ವರುಣ್ ಹೇಳಿಕೆಗಳಿಂದ ಎನ್‌ಡಿಎ ನಷ್ಟಕ್ಕೀಡಾಯಿತು ಅಂದಿದ್ದಾರೆ ಶರದ್ ಯಾದವ್.
- ಏಕಕಾಲದಲ್ಲಿ ಮೋದಿ-ವರುಣ್‌ರನ್ನೂ ಮತ್ತು ಮತದಾರರನ್ನೂ ಅವಮಾನಿಸಿದ್ದಕ್ಕಾಗಿ ಹಾಗೂ ಎನ್‌ಡಿಎ ಅನ್ನು ಅನ್‌ಡರ್ ಎಸ್ಟಿಮೇಟ್ ಮಾಡಿದ್ದಕ್ಕಾಗಿ ಶರದ್‌ಜಿ ವಿರುದ್ಧ ಬಿಟ್ಬಂದ್ಹಳ್ಳಿ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡ್ತಾನಂತೆ ತಿಪ್ಪೇಶಿ!

***

* ಲಾಸ್ಟ್ ಕ್ವೆಶ್ಚನ್: ಮನಮೋಹನ್ ಸಿಂಗ್ ಅವರ ಮುಂದಿನ ನಡೆಗಳು ಏನೇನು?
- ಅಂತರಾತ್ಮದ ಕರೆಗೆ ಓಗೊಡುವುದು, ಅನಾರೋಗ್ಯದ ವಿಷಯ ಬಹಿರಂಗಪಡಿಸುವುದು ಮತ್ತು ರಾಹುಲ್‌ಗೆ ಪಟ್ಟ ಬಿಟ್ಟುಕೊಡುವುದು. ಆರು ತಿಂಗಳೊಳಗೆ!

10 ಕಾಮೆಂಟ್‌ಗಳು:

  1. ಶಾಸ್ತ್ರಿಗಳೇ, ಚೆನ್ನಾಗಿದೆ. ಈ ಸಲದ ಗುಳಿಗೆ ಒಸಿ ಸ್ಟ್ರಾ೦ಗಾಗಿ ಐತೆ.

    ಪ್ರತ್ಯುತ್ತರಅಳಿಸಿ
  2. ಸರ್,

    ನಿನ್ನೆಯದಕ್ಕಿಂತ ಇಂದಿನದು ಸೂಪರ್. ತುಂಬಾ ಚೆನ್ನಾಗಿದೆ...

    ಅದರಲ್ಲೂ ಈ ಕೆಳಗಿನದು ಚಿಕ್ಕದಾಗಿದ್ದರೂ..

    ತೃತಿಯ ರಂಗ ಈಗ ಏನಾಗಿದೆ?
    - ಅದ್ವಿತೀಯ ಮಂಗ!

    ಸೂಪರ್...!

    ಪ್ರತ್ಯುತ್ತರಅಳಿಸಿ
  3. Shasthrigale nivu yaake bhavishya helalu shuru madabaaradu? Kodi halle swami thara? bekidre Kummi ge heli Devegoudaranna nimma bhaktharannagi maduva! :)

    Gulige galu chennagide, last na ondu sadhyadalle nijavaguva sadhyathe ide!

    ಪ್ರತ್ಯುತ್ತರಅಳಿಸಿ
  4. ಪರಾಂಜಪೆ ಅವರೇ, ಗುಳಿಗೆ ಒಸಿ ಸ್ಟ್ರಾ೦ಗಾಗಿ ಇರಲು ನಿಮ್ಮ ಪ್ರೋತ್ಸಾಹವೂ ಕಾರಣ. ಧನ್ಯವಾದ.
    ಶಿವು ಅವರಿಗೂ ರೂಪಾ ಅವರಿಗೂ ಧನ್ಯವಾದಗಳು.
    ಬಾಲು ಅವರೇ, ನಿಮ್ಮ ಸಲಹೆ ಪರಿಶೀಲನಾರ್ಹವಾಗಿದೆ. ಏನೋ ಒಂದು ಹೇಳಿ ಒಂದು ಪ್ರಶ್ನೆಯ ಉತ್ತರಕ್ಕೆ 3000 ರೂಪಾಯಿ ಜೇಬಿಗಿಳಿಸುವ ಛಾನ್ಸು ಯಾಕೆ ಬಿಡಬೇಕು, ಅಲ್ಲವೆ?

    ಪ್ರತ್ಯುತ್ತರಅಳಿಸಿ
  5. Nanna Chutuka!

    Guligege Ondaranthe Kayeleyuntu
    Adu Saripadisallagada Kagguntu
    HeLuva Bhupanige Buddhiyuntu
    KeLuva JaNanige KiviKeppuntu

    ಪ್ರತ್ಯುತ್ತರಅಳಿಸಿ
  6. RaGa, ಧನ್ಯವಾದ ಹೇಳ್ತೀನಿ eega.

    ಮುಕ್ತಕ್ಕಾ,
    ಓದುವವರಿಗೂ ಶಾನೆ ಬುದ್ಧಿಯುಂಟು
    ಒಪ್ಪಬೇಕಾದ ಪುಢಾರಿಗಳದೇ ಪಿಂಟು
    ಎಂದೇ ಅವರಿಗೆ ಈ ಗುಳಿಗೆ ಗಂಟು
    ನಿಮ್ಮ ಚುಟುಕ ಅಗ್ದಿ ಲಾಯಕ್ಕುಂಟು

    ಪ್ರತ್ಯುತ್ತರಅಳಿಸಿ
  7. ನಿಮ್ಮ ಗುಳಿಗೆಗಳು ಪೇನಕಿಲ್ಲರ ಇದ್ದ ಹಾಗೆ ಎಲ್ಲ ಮರೆಸಿ ನಗಿಸುತ್ತವೆ... ಬಹಳ ಚೆನ್ನಾಗಿದೆ ಬ್ಲಾಗ.. ನಿಮ್ಮ ಶಬ್ದಕೊಶವಂತೂ ಅಪಾರ...

    ಪ್ರತ್ಯುತ್ತರಅಳಿಸಿ