ಶನಿವಾರ, ಮೇ 9, 2009

ನೀವು ಕೇಳದಿರಿ - 7

* ಭಾರತದಲ್ಲಿ ಹಂದಿಜ್ವರ ಇದೆಯೆ?

- ಚುನಾವಣೆ ಸೀಸನ್ನಾದ್ದರಿಂದ ಸೇಂದಿಜ್ವರ ಇದೆ.

+++

* ವರುಣ್ ವಿರುದ್ಧ ಮಾಯಾವತಿ ಹೂಡಿದ್ದ ಮೊಕದ್ದಮೆ ವಜಾ ಆಯ್ತಲ್ಲ ಗುರುವೇ!

- ಹೌದು. ವರುಣ್ ಮೇಲೆ ಮಾಯಾ-ಮಂತ್ರ ನಡೆಯಲಿಲ್ಲ. ಮಾಯಾಜಾಲದಿಂದ ವರುಣ್ ಹೊರಬಂದ. ಅವನಿಗೆ ಇನ್ನಾವ ಮಾಯಾಬಜಾರ್ ಕಾದಿದೆಯೋ ’ಮಾಯಾವಿ’ತಿಯೇ ಬಲ್ಲಳು!

+++

* ಹಿಂದೂ-ಮುಸ್ಲಿಮರು ಬಯಸಿದ ದಿನ ರಾಮಮಂದಿರ ನಿರ್ಮಾಣ ಮಾಡುತ್ತಾರಂತೆ ಅಡ್ವಾಣಿ?

- ’ಆದರೆ-ಹೋದರೆ, ಅತ್ತಿ ಮರದಲ್ಲಿ ಹತ್ತಿ ಬೆಳೆದರೆ, ಅಜ್ಜಾ, ನಿನಗೊಂದು ರೇಷ್ಮೆಪಂಚೆ’!

+++

* ನೆಹರೂ ಅವರು ಮಕ್ಕಳನ್ನು ಬಲು ಇಷ್ಟಪಡುತ್ತಿದ್ದರೇ?

- ಮಗಳನ್ನು ಹಾಗೂ ಮಗಳ ಮಕ್ಕಳನ್ನು ಬಲು ಇಷ್ಟಪಡುತ್ತಿದ್ದರು. ಆ ಇಷ್ಟದ ಫಲವನ್ನೇ ನಾವೀಗ ಉಣ್ಣುತ್ತಿರುವುದು!

+++

* ವಿಜಯ್ ಮೋರೆ ಮುಖಕ್ಕೆ ಮಸಿ ಬಳಿದ ಪ್ರಕರಣ ಮೂರೂವರೆ ವರ್ಷಗಳ ನಂತರ ಈಗ ವಿಚಾರಣೆಗೆ ಬಂದಿದೆಯಲ್ಲಾ ಗುರೂ!

- ಹೌದು.
ಮೋರೆ ಮೋರೆಗೆ ಮಸಿ
ಈಗ ತಟ್ಟಿದೆ ಬಿಸಿ
ಇನ್ನೂ ಕಾಯಿರಿ ಒಸಿ
ಆಗುತ್ತೆಲ್ಲಾ ಹುಸಿ

+++

* ಶ್ರುತಿ ಅಭಿಮಾನಿ ನಿಮ್ಮಮೇಲೆ ಕೇಸ್ ಹಾಕ್ತಾನಂತೆ?

- ಮಹೇಂದರ್ ಅಭಿಮಾನಿ ನನ್ನ ಪರವಾಗಿ ವಕೀಲನನ್ನಿಡ್ತಾನೆ.

+++

* ಷೋಗಳ ಟೈಮ್ ಬದಲಾದಕೂಡಲೇ ಸಿನಿಮಾ ಥಿಯೇಟರ್‌ಗೆ ಜನ ನುಗ್ತಾರೆಯೆ?

- ಇಲ್ಲ. ಪ್ರೊಡ್ಯೂಸರ್‌ಗೆ ಟೈಮ್ ಕೂಡಿಬರಬೇಕು!

+++

* ಆ ನೇಪಾಳಿ ಇದ್ದಾನಲ್ಲಾ, ಆತ ಚಂಡನೋ, ಪ್ರಚಂಡನೋ?

- ನಿರ್ಧರಿಸುವುದು ರಣರಂಗ.

+++

* ಅಂತೂ ಕಸಬ್ ವಿರುದ್ಧ ಮೊದಲ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆ ದಾಖಲಾಯಿತು.

- ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಕಸಬ್ ಕೃತ್ಯಕ್ಕೆ ಸಾಕ್ಷಿ ಏಕೆ?

--೦--

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ