ಭಾನುವಾರ, ಮೇ 10, 2009

ನೀವು ಕೇಳದಿರಿ - 8

* ಮೊಯ್ಲಿ ಪದಚ್ಯುತರಾದರು. ಚುನಾವಣೆಯಲ್ಲೂ ಸೋತರೆ ಆಗ?

- ’ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಬರೆದು ಮುಗಿಸಿರುವ ಮಹಾಕವಿ ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ಆರಂಭಿಸಬಹುದು!

+++

* ಮೊಯ್ಲಿ ತಮ್ಮದು ಪದಚ್ಯುತಿ ಅಲ್ಲ ಅಂತಾರೆ?!

- ಹಾಗಾದರೆ ಅದು ರಾಮಾಯಣ!

+++

* ಮೊಯ್ಲಿ ಸಾಹೇಬರದು ಅಂದು ಟೇಪ್ ಹಗರಣ, ಇಂದು?

- ಟ್ರ್ಯಾಪ್ ಹಗರಣ!

+++

* ಶ್ರುತಿ ಮೇಡಂ ತಿರುಪತಿಯಲ್ಲಿ ಮರುಮದುವೆಯಾಗ್ತಾರಂತೆ?

- ಚಕ್ರವರ್ತಿಗೆ ತಿರುಪತಿ ಲಡ್ಡು, ಮಹೇಂದರ್‌ಗೆ ತಿರುಪತಿ ನಾಮ ಎಂಬುದರ ಸಂಕೇತವಾಗಿ ತಿರುಪತಿಯಲ್ಲಿ ಮದುವೆ!

+++

* ಚಿರಂಜೀವಿ ಸ್ಪರ್ಧೆ ತಿರುಪತಿಯಲ್ಲಿ, ಶ್ರುತಿ ಮದುವೆ ತಿರುಪತಿಯಲ್ಲಿ!

- ಹೌದು, ಎರಡೂ ತಿರುಪತಿಯೇ!

+++

* ಶ್ರುತಿಯ ಭಾವಿ ಪತಿಯ ಹೆಸರು ಚಂದ್ರಚೂಡ ಚಕ್ರವರ್ತಿ ಅಂತನಾ?

- ಮಹೇಂದರ್ ಷಾರ್ಟಾಗಿ ’ಚಂಚ’ ಅಂತಾರೆ.
(ಶ್ರುತಿಗೆ ಚೂಡ!) (ಜಗೀಬಹುದು!)

+++

* ಚಂದ್ರಚೂಡ ಚಕ್ರವರ್ತೀನ ಷಾರ್ಟ್ ಆಗಿ ಸೀಸೀ ಅನ್ನಬಹುದಾ?

- ಶ್ರುತಿಗೆ ಸೀಸೀ, ಮಹೇಂದರ್‌ಗೆ ಕಹಿಕಹಿ!
(ನೋಡಿದವರಿಗೆ ’ಇಸ್ಸೀಸೀ!’)

+++

* ಐಪಿಎಲ್ ವಾಣಿಜ್ಯೀಕರಣವನ್ನು ಕೇಂದ್ರ ಕ್ರೀಡಾ ಸಚಿವ ಗಿಲ್ ಆಕ್ಷೇಪಿಸಿದ್ದಾರೆ?

- ಕ್ರಿಕೆಟ್ಟಾಟ ಇರಲಿ, ಕೆಟ್ಟಾಟ ಬೇಡ ಅಂದಿದ್ದಾರೆ.

+++

* ಎಸ್ಸೆಸ್ಸೆಲ್ಸಿಯಲ್ಲಿ ಉಡುಪಿ ಜಿಲ್ಲೆ ಟಾಪ್, ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಟಾಪ್!

- ಡಿಗ್ರಿಯಲ್ಲಿ ಅವೆರಡೂ ಟಾಪ್! ಬೇಸಿಗೇಲಿ ೪೦ರಿಂದ ೪೬ ಡಿಗ್ರಿವರೆಗೂ ಹೋಗುತ್ತೆ!

--೦--

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ