ಭಾನುವಾರ, ಮೇ 3, 2009

ನೀವು ಕೇಳದಿರಿ - 3

* ಕರ್ನಾಟಕದಲ್ಲಿ ಮತದಾನ ಮುಗಿದರೂ ಪಕ್ಷಗಳ ಪರಸ್ಪರ ಕೆಸರೆರಚಾಟ ನಿಂತಿಲ್ಲವಲ್ಲ ಗುರುವೇ!

- ಎಲ್ಲರ ಬಳಿಯೂ ಆ ಪಾಟಿ ಕೆಸರಿದೆಯಲ್ಲಾ, ಅದನ್ನು ಹೇಳು ಶಿಷ್ಯಾ!

+++

* ಪಕ್ಷಗಳ ಕೆಸರೆರಚಾಟದ ಬಗ್ಗೆ ರವಷ್ಟು ಕಮೆಂಟ್ ಮಾಡಿ ಗುರುವೇ.

- ಓಕೆ ಶಿಷ್ಯಾ, ಕೇಳು.
’ಕೈ ಕೆಸರಾದರೆ ಬಾಯ್ ಮೊಸರು’, ಎಂದು ನಂಬಿ ಕಾಂಗ್ರೆಸ್ ’ಕೈ’ ಕೆಸರು ಮಾಡಿಕೊಳ್ಳುತ್ತಿದೆ.
ಜೆಡಿಎಸ್ ಪಿತಮಹಾಶಯ ಸ್ವಯಂ ಕೆಸರಿನ (ಮಣ್ಣಿನ) ಮಗ.
ಇನ್ನು ಬಿಜೆಪಿ; ಅದು ’ಕೆಸರಿನ ಕಮಲ’. ಕೆಸರಿದ್ದರೇನೇ ಕೇಸರಿಗೆ ಖುಷಿ (ಸದಾ ಆನಂದ).
ಹೀಗಿರುವಾಗ ಸದರಿ ಕೆಸರೆರಚಾಟದಲ್ಲಿ ವಿಶೇಷವೇನಿಲ್ಲ.
ನಮ್ಮೀ ಪಕ್ಷಗಳಿಗೆ ಗೊತ್ತಿರುವುದು ಎರಡೇ. ಕೆಸರಾಟ ಮತ್ತು ಕೊಸರಾಟ. ಏನಂತೀ ಶಿಷ್ಯಾ?

+++

* ಸ್ವಿಸ್ ಬ್ಯಾಂಕ್ ಹಣ ಭಾರತಕ್ಕೆ ಬರುತ್ತೆಯೆ?

- ಬರುತ್ತೆ, ಬರುತ್ತೆ; ಮತದಾನದ ಅಂತಿಮ ದಿನವಾದ ಮೇ ೧೩ರ ತನಕ ಬರ್ತಾನೇ ಇರುತ್ತೆ.

+++

* ಮುಷ್ಕರನಿರತ ಕಿರಿಯ ವೈದ್ಯರಿಗೆ ಏನಾಗಬೇಕು?

- ಕಿರಿ ವೈದ್ಯರು ಕಿರಿಕಿರಿ ವೈದ್ಯರಾಗದಿದ್ದರೆ ಸಾಕು.

+++

* ಕಸಬ್ ಏನೇನೋ ಡಿಮಾಂಡ್ ಮಾಡ್ತಿದ್ದಾನೆ!

- ಬೇರೆ ಕಸಬಿಲ್ಲ, ಇನ್ನೇನ್ಮಾಡ್ತಾನೆ?

+++

* ಪ್ರಪಂಚದಲ್ಲೇ ಅತೀ ಸುಂದರರು ಯಾರು?

- ಅಧಿಕಾರದ ಅಥವಾ ಜನಪ್ರಿಯತೆಯ ನಂಟುಳ್ಳವರು.
ಉದಾ: ಮಿಷೆಲ್ ಒಬಾಮಾ, ಫ್ರೀಡಾ ಪಿಂಟೊ, ದೇವ್ ಪಟೇಲ್....

+++

* ವಿಶ್ವಶಾಂತಿಗೆ ಯಾವಯಾವ ಹೋಮ ಮಾಡುತ್ತಾರೆ?

- ಸದ್ಯಕ್ಕೆ ಹಂದಿಗಳ ಮಾರಣಹೋಮ ಮಾಡುತ್ತಿದ್ದಾರೆ.

--೦--

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ