ಭಾನುವಾರ, ಮಾರ್ಚ್ 22, 2009

ಒಂದು ಓವರ್

-1-
ಹರಿದಾಸರ ಪದ: ’ಹರಿಭಜನೆಯ ಮಾಡಿರೋ..’
ಕಿರಿಕೆಟ್ಟಿಗರ ಪದ: ’ಹರಭಜನನ ಭಜಿಸಿರೋ..’

***

-2-
ಕಿವಿಗಳಿರುವುದು
ಕೇಳಲಿಕ್ಕೆ
ಮತ್ತು
ಸೋಲಲಿಕ್ಕೆ

***

-3-
ಹರಭಜನ್ ಕೈಯಲ್ಲಿ
ಕಿವಿ ಬಜ್ಜಿ!
ಸಚಿನ್ ಕೈಯಲ್ಲಿ
ಅದು ಚಿನ್
ದಿ!

***

-4-
ದೋನಿ ಸಾಗಿದೆ
ಮುಂದೆ ಹೋಗಿದೆ
ದೂರ ತೀರವ ಸೇರಿದೆ
ಬೀಸುಗಾಳಿಗೆ
ಬೀಳುತೇಳುವ
ಬಿಳಿಯರ್ ಮೇಗಡೆ ಹಾದಿದೆ!

***

-5-
ದಡ್ಡ ತಿಪ್ಪೇಶಿ ಕೇಳ್ತಾನೆ,
’ದೋನಿಗೆ ಆಸ್ಕರ್ ಸಿಗುತ್ತಾ?’
ದೊಡ್ಡ ಮಟ್ಟದಲ್ಲೇ ಏರಿದೆ ಪಾಪ
ನೆತ್ತಿಗೆ ಆಸ್ಕರ್ ಪಿತ್ತ!
(ತಪ್ಪು ಮಾಧ್ಯಮಗಳದ್ದು,
ಗೊತ್ತಾ?)

***

-6-
ದೋನಿಯನ್ನು ಸೆಳೆಯಲು
ಆಪರೇಷನ್ ಕಮಲ
ನಡೆದರೆ
ಆಶ್ಚರ್ಯವಿಲ್ಲ

2 ಕಾಮೆಂಟ್‌ಗಳು: